Posts

Showing posts from July, 2019

ಉದಮ್ ಸಿಂಗ್ ಹುತಾತ್ಮ ರಾದ ದಿನ 😔🙏

Image
#ಉಧಮ್_ಸಿಂಗ್ 🙏🙏 ಜಲಿಯನ್ ವಾಲಾಬಾಗ್' ಹತ್ಯಾಕಾ೦ಡಕ್ಕೆ ಪ್ರತೀಕಾರವಾಗಿ, ಆಗಿನ ಪ೦ಜಾಬ್'ನ ಗವರ್ನರ್ #ಮೈಕೆಲ್_ಡ್ವಾಯರ್'ನನ್ನು ಹತ್ಯೆಗೈದ ಭಾರತೀಯ ಕ್ರಾ೦ತಿಕಾರಿ #ಉಧಮ್_ಸಿಂಗ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ದಿನ. 😔😔😔 ಭಾರತ ಮಾತೆಯ ವೀರಪುತ್ರ, ಕ್ರಾಂತಿಯ ಕಿಡಿಗೆ ನಮ್ಮ ಅನಂತಕೋಟಿ ಪ್ರಣಾಮಗಳು.... #ಜಲಿಯನ್_ವಾಲಾಬಾಗ್ ಹತ್ಯಾಕಾಂಡದಲ್ಲಿ ಅವತ್ತು ಪ್ರಾಣಬಿಟ್ಟಿದ್ದು 1200 ಕ್ಕೂ ಹೆಚ್ಚು ದೇಶ ಭಕ್ತರು.ಇಷ್ಟೊಂದು ದೊಡ್ಡ ಮಟ್ಟದ ಹತ್ಯಾಕಾಂಡ ಭಾರತದ ಇತಿಹಾಸದಲ್ಲಿ ಬೇರೆ ಯಾವುದೂ ಇಲ್ಲ…ಇದಕ್ಕೆ ಕಾರಣ ಹತ್ಯಾಕಾಂಡದ ರೂವಾರಿ ಡ್ವಯರ್.... ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ನಿಜಕ್ಕೂ ಸೇಡಿನ ಜ್ವಾಲೆ ದಹಿಸುತ್ತಿದ್ದದ್ದು ಅವನೊಬ್ಬನಲ್ಲಿ ಮಾತ್ರ. ಆತನ ಹೆಸರು ಉದಮ್ ಸಿಂಗ್. ಹತ್ಯಾಕಾಂಡವನ್ನ ಕಣ್ಣಾರೆ ನೋಡಿದ್ದ ಮತ್ತು ಬ್ರಿಟೀಷರ ಗುಂಡುಗಳಿಂದ ಗಾಯಗೊಂಡಿದ್ದ ಉದಮ್ ಸಿಂಗ್ ಹತ್ಯಾಕಾಂಡಕ್ಕೆ ಪ್ರತೀಕಾರ ಕೈಗೊಳ್ಳಲು ಪಣ ತೊಟ್ಟಿದ್ದ. ಅದು 1940 ಮಾರ್ಚ್ 13 ನೇ ತಾರೀಕಿನ ದಿನ. ಹತ್ಯಾಕಾಂಡಕ್ಕೆ ಪ್ರತೀಕಾರ ತೆಗೆದುಕೊಳ್ಳುವ ಅವಕಾಶ ಉದಮ್ ಸಿಂಗ್ ಗೆ ಸಿಕ್ಕಿಬಿಟ್ಟಿತ್ತು. ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಜನರಕ್ ಡ್ವಯರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಗುಂಡಿಗೆ ಗುಂಡಿನಿಂದಲೇ ಉತ್ತರಿಸಿ ಪ್ರತೀಕಾರ ತೀರಿಸಿಕೊಂಡಿದ್ದ ಉದಮ್ ಸಿಂಗ್. ಉದಮ್ ಸಿಂಗ್ ಹೇಳಿದ...

AH- 64E ಹೆಲಿಕಾಪ್ಟರ್ ಭಾರತಕ್ಕೆ ಆಗಮನ 💪🇮🇳💐

Image
#AH_64E_ಹೆಲಿಕಾಪ್ಟರ್_ಭಾರತಕ್ಕೆ_ಆಗಮನ💐😍 ಭಾರತೀಯ ವಾಯುಪಡೆಯು ಆದೇಶಿಸಿದ 22 ಅಪಾಚೆ ದಾಳಿ ಹೆಲಿಕಾಪ್ಟರ್‌ಗಳಲ್ಲಿ 4 ಹೆಲಿಕಾಪ್ಟರ್‌ ಗಳು ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ಮುಟ್ಟಿವೆ.  ಅಪಾಚೆ ಭಾರತದ ರಕ್ಷಣಾ ಶಸ್ತ್ರಾಗಾರದಲ್ಲಿ ಸೇರ್ಪಡೆಗೊಂಡ  ಹೆಲಿಕಾಪ್ಟರ್ ಮೇಲೆ ದಾಳಿ ಮಾಡುವ ಮೊದಲ ಹೆಲಿಕಾಪ್ಟರ್ ಆಗಿರುವುದರಿಂದ ಇದು ನಮ್ಮ ಸೈನ್ಯದಲ್ಲಿ ಮಹತ್ವದ ಬೆಳವಣಿಗೆ ತರಲಿದೆ..💪🇮🇳 2015 ರಲ್ಲಿ 22 ಅಪಾಚೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಬಹು-ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ನಾಲ್ಕು ಎಹೆಚ್ -64 ಇ ಅಪಾಚೆ ಭಾರತಕ್ಕೆ ಆಗಮಿಸಿದೆ ಮತ್ತು ಹೆಚ್ಚುವರಿ ನಾಲ್ಕು ಚಾಪರ್‌ಗಳನ್ನು ಮುಂದಿನ ವಾರ ಐಎಎಫ್‌ಗೆ ತಲುಪಿಸಲಾಗುವುದು ಎಂದು ಬೋಯಿಂಗ್ ಹೇಳಿದೆ.. ಮುಂದಿನ ವಾರ ಮತ್ತೆ ನಾಲ್ಕು ಚಾಪರ್ಗಳು ಬಂದ ನಂತರ ಒಟ್ಟು ಎಂಟು ಚಾಪರ್ಗಳು ಸೆಪ್ಟೆಂಬರ್ನಲ್ಲಿ ಐಎಎಫ್ ಅವರ formal ಪಚಾರಿಕ ಪ್ರವೇಶಕ್ಕಾಗಿ ಪಠಾಣ್ಕೋಟ್ ವಾಯುಪಡೆಯ ನಿಲ್ದಾಣಕ್ಕೆ ತೆರಳುತ್ತವೆ..🙏 ಜೈ ಜವಾನ್ 💪 ಜೈ ಹಿಂದ್ 🇮🇳 US aerospace major Boeing on Saturday handed over the first four of the 22 Apache attack helicopters to the Indian Air Force while another batch of four choppers will be delivered next week. The delivery of the first batch of the AH-64E A...

CRPF ಸ್ಥಾಪನಾ ದಿನ 🇮🇳💪💐

Image
ದೇಶದ ರಕ್ಷಣೆಗಾಗಿ, ಭಾರತದ ಅಖಂಡತೆಯನ್ನ ಕಾಪಾಡುತ್ತ, ಸಂರಕ್ಷಿಸುತ್ತ ದಿನದ 24 ಗಂಟೆಗಳ ಕಾಲ ಸದಾ ರಾಷ್ಟ್ರ ಕಾಯುವ ಧೀರ #CRPF ಸ್ಥಾಪನಾ ದಿನದ ಹಾರ್ದಿಕ ಶುಭಾಷಯಗಳು..💪🇮🇳💐 ಹಲವರು ತಮ್ಮ ಪ್ರಾಣವನ್ನು ಬಲಿದಾನ ಕೊಟ್ಟು ಹಲವರು ತನ್ಮ ಆಯುಷ್ಯ, ತಾರುಣ್ಯವನ್ನೇ ಬಲಿಕೊಟ್ಟು ದೇಶದ ರಕ್ಷಣೆಯನ್ನ ಮಾಡುತ್ತಿದ್ದಾರೆ. ಹೌದು ನಾವು ಮಾತನಾಡುತ್ತಿರೋದು ಕೇಂದ್ರ ರಿಸರ್ವ್ ಪೋಲಿಸ್ ಫೋರ್ಸ್(CRPF) ನ ಬಗ್ಗೆ. CRPF ಭಾರತದ ಅತಿದೊಡ್ಡ ಸಶಸ್ತ್ರ ಬಲಗಳಲ್ಲಿ‌ ಒಂದಾಗಿದೆ. ಇದು ಭಾರತ ಸರ್ಕಾರದ ಗೃಹ ಖಾತೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಿಆರ್‌ಪಿಎಫ್ ನ್ನ ಬ್ರಿಟಿಷ್ ಕಾಲಖಂಡದಲ್ಲಿ ಜುಲೈ 27, 1939 ರಲ್ಲಿ CRP ಎಂದು ಅಂದರೆ ಕ್ರೌಮ್ ರೆಪ್ರೆಸೆಂಟೇಟಿವ್ ಪೋಲಿಸ್ ಎಂಬ ಹೆಸರಿನಿಂದ ಹುಟ್ಟು ಹಾಕಲಾಗಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದ ಎರಡು ವರ್ಷಗಳ ನಂತರ ಅಂದರೆ 1949 ರಲ್ಲಿ ದೇಶದ ಮೊದಲ ಗೃಹಮಂತ್ರಿಗಳಾಗಿದ್ದ #ಸರ್ದಾರ್_ವಲ್ಲಭಭಾಯ್_ಪಟೇಲರು CRP ಯನ್ನು CRPF (Central Reserve Police Force) ಎಂದು ಬದಲಾಯಿಸಿದ್ದರು.‌ ಪಟೇಲರು ಇದರ ಹೆಸರನ್ನಷ್ಟೇ ಬದಲಿಸಿದ್ದರು ಹೊರತು ಈ ಫೋರ್ಸ್‌ನ ಕಾರ್ಯಶೈಲಿಯನ್ನ ಬದಲಿಸಲಿಲ್ಲ. ಬ್ರಿಟಿಷರ ಕಪಿಮುಷ್ಟಿಯಿಂದ ಭಾರತ ಸ್ವಾತಂತ್ರ್ಯವಾದ ಬಳಿಕ ಕೆಂಪು‌ಮುಸುಡಿಯ ಬ್ರಿಟೀಷರ ದಾಸ್ಯತೆಯನ್ನ ಅಳಿಸಿ ಹಾಕಲು ಪಟೇಲರು CRP ಎಂಬ ಹೆಸರನ್ನ ಬದಲಿಸಿ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್(CR...

ಕಾರ್ಗಿಲ್ ವೀರ ಯೋಧರ ನೆನಪು 🙏😍🇮🇳

Image
ಜುಲೈ 26: ಇದೇ ದಿನ 20 ವರ್ಷಗಳ ಹಿಂದೆ, ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ಪ್ರದೇಶಗಳನ್ನು ನಮ್ಮ ಯೋಧರು ಮರಳಿ ವಶಕ್ಕೆ ಪಡೆದರು. ಅಂದಿನಿಂದ ಈ ದಿನವನ್ನು ‘ಕಾರ್ಗಿಲ್‌ ದಿನ’ವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದು ವಿಜಯೋತ್ಸವದ ಜತೆಗೆ ನಮ್ಮ ಧೀರ ಯೋಧರ ತ್ಯಾಗ ಬಲಿದಾನದ ನೆನಪಿನ ದಿನವೂ ಹೌದು. ಆಪರೇಷನ್ ವಿಜಯ್ 1. ಸಿಯಾಚಿನ್ ನೀರ್ಗಲ್ಲು ಪ್ರದೇಶವು ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಆಕ್ರಮಿತ ಅಕ್ಷಾಯಿಚಿನ್ ಪ್ರದೇಶವನ್ನು ಬೇರ್ಪಡಿಸುತ್ತದೆ. ಈ ಎರಡೂ ಪ್ರದೇಶಗಳ ಮಧ್ಯೆ ಸಂಪರ್ಕ ಕಲ್ಪಿಸಲು ಸಿಯಾಚಿನ್ ನೀರ್ಗಲ್ಲಿನ ಇಕ್ಕೆಲಗಳಲ್ಲಿರುವ ಪರ್ವತ–ಕಣಿವೆ ಪ್ರದೇಶದ ಮೇಲಿನ ನಿಯಂತ್ರಣ ಅನಿವಾರ್ಯ. ಜಗತ್ತಿನ ಅತ್ಯಂತ ಎತ್ತರದ ಸೇನಾ ನೆಲೆ ಇರುವ ಪ್ರದೇಶವಿದು. ಭಾರತವು ಈ ಪ್ರದೇಶದ ಮೇಲೆ ನಿಯಂತ್ರಣ ಹೊಂದಿದೆ. ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದೇ ಕಾರ್ಗಿಲ್ ಮೇಲಿನ ಪಾಕಿಸ್ತಾನದ ಅತಿಕ್ರಮಣದ ಹಿಂದಿನ ಉದ್ದೇಶ 2. ಸಿಯಾಚಿನ್ ಮೂಲ ಶಿಬಿರಕ್ಕೆ ಆಹಾರ, ಶಸ್ತ್ರಾಸ್ತ್ರ ಮತ್ತಿತರ ಸಾಮಗ್ರಿಗಳನ್ನು ಶ್ರೀನಗರದಿಂದ ಕಾರ್ಗಿಲ್‌ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 1ಡಿ ಮೂಲಕವೇ ಸಾಗಿಸಬೇಕು. ಮೂಲ ಶಿಬಿರದಿಂದ ಈ ಸಾಮಗ್ರಿ ಗಳನ್ನು ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿರುವ ಸೇನಾ ನೆಲೆಗೆ ಹೊತ್ತೊಯ್ಯಬೇಕು 3. ಕಾರ್ಗಿಲ್‌ ಅನ್ನು ವಶಪಡಿಸಿಕೊಂಡರೆ, ರಾಷ್ಟ್ರೀಯ ಹೆದ್ದಾರಿ 1ಡಿ ಸಹ ತಮ್ಮ ಕೈವಶವಾಗುತ್ತದೆ. ಆಗ ಸ...

ಕಾರ್ಗಿಲ್ ಹುತಾತ್ಮರ ದಿನ (ವಿಜಯ್ ದಿವಾಸ್) 💪🙏

Image
#ಕಾರ್ಗಿಲ್_ಕದನ #ವಿಜಯ_ದಿವಸ_ಜುಲೈ_26 ಒಂದು ಕಡೆ #ವಿಜಯದ ಸಂಭ್ರಮ... ಇನ್ನೊಂದು ಕಡೆ ಹುತಾತ್ಮ ಯೋಧರ ನೆನಪು 😔😔😔😔 ಕರ ಮುಗಿದು ನಿನಲ್ಲಿ ಬೇಡುವುದಿಷ್ಟೇ ದೇವಾ! ನಿವಾರಿಸು ಈ ತ್ಯಾಗಿಗಳ ಮನೆಯವರ ನೋವಾ ಮತೆ ಆರ೦ಭವಾಗದಿರಲಿ ಈ ಬೇಡದ ಕದನ ವೀರಯೋಧರೇ – ಇದೋ ನಿಮಗೆ ನಮ್ಮೆಲ್ಲರ ನಮನ..🙏🏼🙏🏼 ಒಂದು ಕಡೆ ಗುಂಡಿನ ಸುರಿಮಳೆ..... ಇನ್ನೊಂದು ಕಡೆ ಕಡಿದಾದ ಆಯ ಕಟ್ಟಿನ ಸ್ಥಳ...... ಮತ್ತೊಂದು ಕಡೆ ಮೈ ಕೊರೆವ ಚಳಿ........! ಮಗದೊಂದು ಕಡೆ ರಕ್ತದ ಮಡುವಿನಲ್ಲಿ ಬಿದ್ದ ರಾಶಿ ರಾಶಿ ಹೆಣಗಳು...... ಅಬ್ಬಾ !! ಎಂಥಹ ಭಯಾನಕ ಸನ್ನಿವೇಶ...!!! ಹೌದು, ಇದು ಕಾರ್ಗಿಲ್ ಯುದ್ದದ ರಣರಂಗದ ಚಿತ್ರಣ. ಪವಿತ್ರ ಸ್ಥಳವನ್ನು ಅಪವಿತ್ರ ಮಾಡಲು ಹೊರಟ ಪಾತಕಿಗಳ ಹುಟ್ಟಡಗಿಸಿ ಇಂದಿಗೆ ಬರೋಬ್ಬರಿ 19 ವರ್ಷಗಳು ಸಂದಿವೆ. ಅಂದು ಜುಲೈ 26, 1999 ರಲ್ಲಿ ವೈರಿ ರಾಷ್ಟ್ರ, ಪಾಪಿ ಪಾಕಿಸ್ಥಾನವನ್ನು ಹೆಡೆಮುರಿ ಕಟ್ಟಿ ಬಗ್ಗು ಬಡಿದು ಕಾರ್ಗಿಲ್ ಯುದ್ಧವನ್ನು ಗೆದ್ದಂತಹ ದಿನ ಆ ದಿನವನ್ನು ಭಾರತೀಯರಾದ ನಾವು ಜುಲೈ 26 ರಂದು “ಕಾರ್ಗಿಲ್ ವಿಜಯೋತ್ಸವ ದಿನ”ವೆಂದು ಆಚರಿಸುತ್ತೇವೆ. ಇಂದಿಗೆ ಆ ವಿಜಯದ ಸವಿನೆನಪಿನ 19 ವರ್ಷಗಳು ಕಳೆದಿವೆ. ಆದರೆ ಆ ಗೆಲುವಿನ ಯಶೋಗಾಥೆಯ ಖುಷಿಯ ಹಿಂದೆ ಸಾವಿರಾರು ವೀರಯೋಧರ ನೋವಿದೆ, ಸಂಕಷ್ಟದ ಕರಾಳ ನೆನಪುಗಳಿವೆ, ಮರಣ ಕಾವ್ಯವಿದೆ. ನಮ್ಮ ಈ ನೆಮ್ಮದಿಯ ಸಂತೋಷದ ಜೀವನ ನಿಮ್ಮಯ ತ್ಯಾಗ ಬಲಿದಾನದ ಭಿಕ್ಷೆ. ನಿಮಗೆ ನ...

ದಕ್ಷಿಣ ಏಷ್ಯಾದಲ್ಲಿ #ಭಾರತದಲ್ಲಿ ಮೊದಲ ಬಾರಿಗೆ ನದಿಯ ಕೆಳಗೆ ಸಾರಿಗೆ ಸುರಂಗವನ್ನು ನಿರ್ಮಿಸಲಾಗುತ್ತಿದೆ..💪😍🇮🇳

Image
#ಈಸ್ಟ್_ವೆಸ್ಟ್_ಮೆಟ್ರೋ_ಸುರಂಗ 💓 ಭಾರತೀಯ ರೈಲ್ವೆಯಡಿ ಕಾರ್ಯನಿರ್ವಹಿಸುವ ಕೋಲ್ಕತಾ ಮೆಟ್ರೋ ದೇಶದ ಮೊದಲ ಸಾರಿಗೆ ಸುರಂಗವನ್ನು ನಿರ್ಮಿಸಿದ್ದು ಅದು ನದಿಯ ಮೂಲಕ ಹಾದುಹೋಗುತ್ತದೆ. ಸುರಂಗ ಉದ್ದ 16.6 ಕಿಲೋಮೀಟರ್ (6.8ಮೈಲಿ) ಮತ್ತು ಅಗಲ 5.5 ಮೀಟರ್ (18 ಅಡಿ). 520 ಮೀ ಉದ್ದದ ಟ್ರ್ಯಾಕ್ಗಳು ​​ಹೂಗ್ಲಿ ನದಿಯ ಅಡಿಯಲ್ಲಿ ಸುರಂಗದ ಮೂಲಕ ಹೋಗುತ್ತವೆ. ಸುರಂಗದ ಮೇಲ್ಛಾವಣಿಯು ನೆಲದ ಮಟ್ಟದಿಂದ ಸುಮಾರು 30 ಮೀಟರ್ಗಳಷ್ಟು ಇರುತ್ತದೆ. ನೀರಿನ ಸೋರಿಕೆಯಿಂದ ಸುರಂಗವನ್ನು ರಕ್ಷಿಸಲು, 3-ಹಂತದ ಸುರಕ್ಷತಾ ರಕ್ಷಾಕವಚವನ್ನು ಮಾಡಲಾಗಿದೆ. ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಈ ಮೆಟ್ರೋ ರೈಲು ಸಂಚರಿಸಲಿದೆ. ಈ ಸುರಂಗವನ್ನು ವಿಶ್ವದ ಅತ್ಯುತ್ತಮ ತಂತ್ರಜ್ಞಾನದಿಂದ ತಯಾರಿಸಲಾಗಿದ್ದು, ಶೀಘ್ರದಲ್ಲೇ ಇದನ್ನು ಪ್ರಯಾಣಿಕರಿಗೆ ರೈಲು ಪ್ರಯಾಣಿಕರಿಗೆ ಪರಿಚಯಿಸಲಾಗುವುದು. ದಕ್ಷಿಣ ಏಷ್ಯಾದಲ್ಲಿ #ಭಾರತದಲ್ಲಿ ಮೊದಲ ಬಾರಿಗೆ ನದಿಯ ಕೆಳಗೆ ಸಾರಿಗೆ ಸುರಂಗವನ್ನು ನಿರ್ಮಿಸಲಾಗುತ್ತಿದೆ..💪😍🇮🇳 ಜೈ ಹಿಂದ್ 🇮🇳

ಕಾರ್ಗಿಲ್ ವಿಜಯ ದಿವಸ್ 🇮🇳💪

Image
#ಕಾರ್ಗಿಲ್_ವಿಜಯ_ದಿವಸ😍💪💐 ಕಾರ್ಗಿಲ್‌ ಯುದ್ಧದ ಗೆಲುವಿಗೆ ಇಂದು 20 ವರ್ಷ. ಪಾಕಿಸ್ತಾನದ 'ಆಪರೇಷನ್‌ ಬದ್ರ್‌'ಗೆ ಪ್ರತಿಯಾಗಿ ಭಾರತ ಕೈಗೊಂಡ 'ಆಪರೇಷನ್‌ ವಿಜಯ್‌' ಭಾರತೀಯ ನರನಾಡಿಗಳಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿದ ಯುದ್ಧ. ಅದು 1999ರ ಮೇ ತಿಂಗಳು. ಸರಿಯಾಗಿ ಒಂದು ವರ್ಷದ ಹಿಂದೆ ಭಾರತ ಪೋಖರಣ್‌ನಲ್ಲಿ ಪರಮಾಣು ಪರೀಕ್ಷೆ ನಡೆಸಿ ಯಶಸ್ವಿಯಾಗಿತ್ತು. ಆ ಪರೀಕ್ಷೆಯ ಔಚಿತ್ಯದ ಬಗ್ಗೆ ಭಾರತದಲ್ಲಿಯೇ ಪ್ರಶ್ನೆಗಳು ಏಳತೊಡಗಿದ್ದವು. ದೇಶದ ಭದ್ರತೆಯ ನೆಪದಲ್ಲಿ ಅನವಶ್ಯಕ ಖರ್ಚು ಎಂಬ ದುಮ್ಮಾನ ಮುಂದುವರಿದೇ ಇತ್ತು. ಇದೇ ವೇಳೆಯಲ್ಲೇ, ಅಂದರೆ 1998-99ರ ಚಳಿಗಾಲದಲ್ಲಿ ಪಾಕಿಸ್ತಾನ ತನ್ನ ಸೇನೆಯ ಕೆಲವು ತುಕಡಿಗಳನ್ನು ಭಾರತದ ಗಡಿ ನಿಯಂತ್ರಣ ರೇಖೆಯೊಳಕ್ಕೆ ಸದ್ದಿಲ್ಲದೇ ಸಾಗಿಸತೊಡಗಿತ್ತು. 'ಆಪರೇಷನ್‌ ಬದ್ರ್‌' ಎಂಬ ಗುಪ್ತನಾಮದಲ್ಲಿ ನಡೆದ ಆ ಕಾರ್ಯಾಚರಣೆಯ ಮುಖ್ಯ ಗುರಿ ಕಾಶ್ಮೀರ ಮತ್ತು ಲಡಾಖ್‌ ನಡುವಿನ ಕೊಂಡಿಯನ್ನು ಒಡೆದು, ಭಾರತ ಪಡೆಗಳು ಸಿಯಾಚಿನ್‌ ಗ್ಲೇಸಿಯರ್‌ನಿಂದ ಹಿಂದೆ ಸರಿಯುವಂತೆ ಮಾಡುವುದಾಗಿತ್ತು. ಇತ್ತ ಪಾಕಿಸ್ತಾನಿ ಸೇನೆ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆಯೇ ಭಾರತೀಯರೆಲ್ಲ ಬೆಚ್ಚಿ ಕುಳಿತರು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಭಾರತದ ಯುವ ಸೇನೆ ಯುದ್ಧವೊಂದಕ್ಕೆ ಮೈಕೊಡವಿ ಎದ್ದುನಿಂತಿತು.  ಪರ್ವತಮಯ ಪ್ರದೇಶದಲ್ಲಿ, ಅತಿ ಎತ್ತರದಲ್ಲಿ ನಡೆಯಲಿದ್ದ ಈ ಸ...

ಮಹಾನ್ ಕ್ರಾಂತಿಕಾರಿ ಬಟುಕೇಶ್ವರ ದತ್ತ ಪುಣ್ಯತಿಥಿ.

Image
ಮಹಾನ್ ಕ್ರಾಂತಿಕಾರಿ #ಬಟುಕೇಶ್ವರ_ದತ್ತ ಪುಣ್ಯತಿಥಿ😔🙏 ಭಾರತ ಬ್ರಿಟಿಷರ ಅಧೀನದಲ್ಲಿ ಸಿಲುಕಿದ್ದ ಸಮಯದಲ್ಲಿ ಅದೆಷ್ಟೋ ಮಾರಣಹೋಮಗಳು ನಡೆದುಹೋಗಿದ್ದವೋ ಗೊತ್ತಿಲ್ಲ. ಆದರೆ ಸ್ವಾತಂತ್ರ್ಯದ ಕಿಚ್ಚನ್ನು ಎಲ್ಲೆಡೆ ಹಬ್ಬಿಸಿದಂತಹ ಅಸಂಖ್ಯಾತ ಕ್ರಾಂತಿಕಾರಿಗಳ ಹೋರಾಟದಿಂದಾಗಿ ದೇಶ ಇಂದು ಸ್ವಾತಂತ್ರ್ಯದ ಬೆಳಕನ್ನು ಕಂಡಿರುವುದು ಮಾತ್ರ ಅಕ್ಷರಶಃ ನಿಜ… ಆದರೆ ಅಂಡಮಾನಿನಲ್ಲಿನ ಸೆರೆಮನೆಗಳ ತೀಕ್ಷ್ಣ ಕ್ರೌರ್ಯವನ್ನು ಅನುಭವಿಸಿದರು ಕೂಡ ದೇಶ ಸ್ವತಂತ್ರವಾಗುವವರೆಗೆ ಹೋರಾಟವನ್ನು ನಿಲ್ಲಿಸದ ಈ ವೀರ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜ್‍ಗುರು ಒಡನಾಡಿಗಳಾಗಿ ಮೆರೆದಿರುವಂತಹ ಕ್ರಾಂತಿಕಾರಿಗಳಲ್ಲೊಬ್ಬರು.ಅದೆಷ್ಟೋ ಕ್ರಾಂತಿಕಾರಿಗಳು ಇತಿಹಾಸದ ಪುಟಗಳಲ್ಲಿ ನಾಪತ್ತೆಯಾಗಿದ್ದಾರೋ ಗೊತ್ತಿಲ್ಲ. ಆದರೆ, ವೀರ ಯೋಧನೆಂದೆನಿಸಿರುವ ವೀರ ಸಾರ್ವಕರ್ ಅವರಿಂದಲೇ ಪ್ರೇರಿತನಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ ಭಗತ್ ಸಿಂಗ್, ಮದನ್ ಲಾಲ್ ಧಿಂಗ್ರ, ಅಜಾದ್ ಮೊದಲಾದವರ ಸಾಲಿನಲ್ಲಿ ಸೇರಿಕೊಂಡಿರುವ ಈ ವೀರ ಬೇರಾರು ಅಲ್ಲ. ಭಗತ್ ಸಿಂಗ್ ರ ಜೊತೆಗೂಡಿ ಅಸೆಂಬ್ಲಿಯಲ್ಲಿ ಬಾಂಬ್ ಸಿಡಿಸಿ ಬ್ರಿಟಿಷರ ನಿದ್ದೆಗೆಡಿಸಿದ ನಮ್ಮ ದೇಶ ಕಂಡ ಶ್ರೇಷ್ಠ ಕ್ರಾಂತಿಕಾರಿ ಬಟುಕೇಶ್ವರ ದತ್ತ. ಸ್ವತಂತ್ರ ಪೂರ್ವದಲ್ಲಿ ಯುವಕನೋರ್ವ ಅಂಡಮಾನಿನ ಸೆರೆಮನೆಯಲ್ಲಿದ್ದುಕೊಂಡು ಸೆರೆಮನೆಯ ಕಿರುಕುಳವನ್ನೆಲ್ಲ ಸಹಿಸಿ, ಅಲ್ಲಿನ ವ್ಯವಸ್ಥೆಯ ವಿರುದ್ದ ಹೋರಾಡುತ್ತಾ ಕೋಲ್ಕತ್ತಾ ...

ಮಹಾನ್ ಹೋರಾಟಗಾರ ಮಂಗಲ್ ಪಾಂಡೆಯ ಜನ್ಮ ದಿನ

Image
ಭಾರತೀಯ ರಾಷ್ಟ್ರೀಯತೆಯ ಹೋರಾಟಕ್ಕೆ #ಮಂಗಲ್_ಪಾಂಡೆಯವರ ಅಮೋಘ ಕೊಡುಗೆ ಅವಿಸ್ಮರಣೀಯ. ಅಂಥ ಮಹಾನ್ ಹೋರಾಟಗಾರರಿಗೆ  ಜನ್ಮದಿನದ ಶುಭಾಶಯಗಳು..😍💐 ಮಂಗಲ್ ಪಾಂಡೆ ಎಂಬ ಹೆಸರು ಭಾರತೀಯ ಸೈನಿಕರ ಪಾಲಿಗೆ, ದೇಶಭಕ್ತರ ಪಾಲಿಗೆ ಒಂದು ಸ್ಫೂರ್ತಿ ಮಂತ್ರವೇ ಸರಿ. 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಮಂಗಲ್ ಪಾಂಡೆ(ಜುಲೈ 19, 1827- ಏಪ್ರಿಲ್ 8, 1857)ಯವರ 192 ನೇ ಜನ್ಮದಿನ ಇಂದು. ಅದಕ್ಕೆಂದೇ ದೇಶದಾದ್ಯಂತ ಗಣ್ಯರು, ಕ್ರಾಂತಿಕಿಡಿ ಮಂಗಲ್ ಪಾಂಡೆಯವರ ಜನ್ಮದಿನವನ್ನು ನೆನೆಸಿಕೊಂಡಿದ್ದಾರೆ. ಭಾರತೀಯ ಸ್ವಾತಂತ್ರ್ಯ ಹೋರಾಟದ ಮೊದಲ ಹೆಜ್ಜೆಗೆ ನಾಂದಿ ಹಾಡಿದ ಮಂಗಲ್ ಪಾಂಡೆ ಅವರ ಧೈರ್ಯ, ದೇಶಭಕ್ತಿಯನ್ನು ನೆನಪಿಸಿಕೊಳ್ಳುವುದಕ್ಕೆ ಇದೊಂದು ಸುಸಂದರ್ಭ. ಬೆಂಗಾಲ್ ನೇಟಿವ್ ಇನ್ ಫೇಂಟ್ರಿಯ 34 ನೇ ರೆಜಿಮೆಂಟ್ ನ ಸಿಪಾಯಿಯಾಗಿದ್ದ ಮಂಗಲ್ ಪಾಂಡೆ ಹುಟ್ಟಿದ್ದು, ಜುಲೈ 19, 1827 ರಲ್ಲಿ. ಈಗಿನ ಉತ್ತರ ಪ್ರದೇಶದ ಬಾಲ್ಲಿಯಾ ಜಿಲ್ಲೆಯ ನಾಗ್ವಾ ಎಂಬ ಹಳ್ಳಿಯಲ್ಲಿ ದಿವಾಕರ್ ಪಾಂಡೆ, ಅಭೈರಾಣಿ ಪಾಂಡೆ ದಂಪತಿಗಳ ಮಗನಾಗಿ ಜನಿಸಿದ ಮಂಗಲ್ ಪಾಂಡೆ, 1849 ರಲ್ಲಿ ಬೆಂಗಾಳ ಸೇನೆಯನ್ನು ಸೇರಿದರು. ಮಂಗಲ್ ಪಾಂಡೆ ಹೆಸರು ಇತಿಹಾಸದಲ್ಲಿ ಅಜರಾಮರವಾಗುವುದಕ್ಕೆ ಸಂದರ್ಭ ಸೃಷ್ಟಿಯಾಗಿದ್ದು, 1857, ಮಾರ್ಚ್ ನಲ್ಲಿ. ಆ ಸಂದರ್ಭದಲ್ಲಿ ಬ್ರಿಟೀಶ್ ಸರ್ಕಾರ ಹೊಸದಾಗಿ ಪರಿಚಯಿಸಿದ್ದ ಎನ್ಫೀಲ್ಡ್ ಪಿ-53 ರೈಫಲ್ ಗಳ ಬುಲೆಟ್ ಕಾರ್ಟ್ರಿಜ್ ಗೆ ...

ಗುರು ಪೂರ್ಣಿಮೆ ಶುಭಾಶಯಗಳು

Image
#ಗುರುಪೂರ್ಣಿಮೆಯ_ಶುಭಾಶಯಗಳು😍💐🙏 ಗುರು ಪೂರ್ಣಿಮಾ ದಿನದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ವ್ರತ ಆಚರಿಸುವವರಿಗೆ ಸಮದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮಾ ದಿನವನ್ನು ಗುರು ಪೂರ್ಣಿಮ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಗುರು ಪೂರ್ಣಿಮವು ಗುರು – ಶಿಷ್ಯ ಪರಂಪರೆಯ ಸಂಕೇತವಾಗಿದೆ. ಸಂಸ್ಕೃತದಲ್ಲಿ ಗು’ ಎಂದರೆ ಕತ್ತಲು ರು’ ಎಂದರೆ ಹೋಗಲಾಡಿಸುವುದು. ಅಂದರೆ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸುವವರಿಗೆ ಗುರು’ ಎಂದು ಕರೆಯುತ್ತೇವೆ. ಗುರು ಪೂರ್ಣಿಮಾ ದಿನವು ಅಜ್ಞಾನವನ್ನು ತೊಡೆದುಹಾಕಿ ಸಾರ್ಥಕ ಜೀವನದ ಜ್ಞಾನೋದಯ ಉಂಟುಮಾಡುವ ಸ್ಫೂರ್ತಿದಾಯಕ ದಿನವಾಗಿದೆ. (ಜ್ಞಾನವೇ ಮೋಕ್ಷ, ಅಜ್ಞಾನವೇ ಸಂಸಾರ) . ಇದು ಋಷಿಗಳಿಗೆ ಮಾತ್ರವಲ್ಲದೇ ವೇದಾಧ್ಯಯನ ಮಾಡುವವರಿಗೂ ಪವಿತ್ರವಾಗಿದೆ. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಗುರುಗಳಿಗೆ ವಿಶೇಷವಾದ ಗೌರವ ಸ್ಥಾನ ಇರುವುದರಿಂದ ಗುರು ಪೂರ್ಣಿಮಾ ಸರ್ವರಿಗೂ ಪವಿತ್ರವಾಗಿದೆ. ಈ ದಿನ ಪ್ರತಿಯೊಬ್ಬರೂ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸಬೇಕಾದುದು ಧಾರ್ಮಿಕ ಕರ್ತವ್ಯವಾಗಿದೆ. ಈ ದಿನ ವೇದವ್ಯಾಸರ ಜಯಂತಿ. ವೇದವ್ಯಾಸ’ ಸಾಂಕೇತಿಕ ಅರ್ಥವುಳ್ಳ ರಹಸ್ಯ ಪೂ...

JusticeForSowjanya

Image
ಈ ಸಮಾಜದಲ್ಲಿ ಬಡವರ ಸಾವಿಗೆ ನ್ಯಾಯ ಮರೀಚಿಕೆಯೇ ...??? ಮುಗ್ಧ ಹೆಣ್ಣು ಮಗಳು #ಸೌಜನ್ಯ ಕೊಲೆಯಾಗಿ 7 ವರ್ಷವಾದರೂ ನ್ಯಾಯದ ಕಣ್ಣಿಗೆ ಬಟ್ಟೆ ಕಟ್ಟಿ ಮೌನವಾಗಿರುವ ಪ್ರಭಾವಿ ವ್ಯಕ್ತಿಗಳು..😉😉 ನಾನು ಸೌಜನ್ಯ ನಿಮ್ಮಲ್ಲರ ನತದೃಷ್ಟೆ ತಂಗಿ..!ನೆನಪಿರಬೇಕಲ್ಲವೇ ಅಂದು 2012 ಅಕ್ಟೊಬರ್ 9 ರಂದು ಕಾಲೇಜಿನಿಂದ ಮನೆಗೆ ಹೋರಟ ನಾನು ಮನೆಗೆ ತಲುಪಲೇ ಇಲ್ಲ.ೌ ಬಹುಷಃ  ಅದೇ  ನನ್ನ ವಿಧ್ಯಾರ್ಥಿ ಜೀವನದ  ಕೊನೆಯ ಪಯಣ   ಆಗಿತ್ತೆನೋ. ಮನೆಯಲ್ಲಿ ಮಗಳಿಗೊಸ್ಕರ  ಕಾಯುತ್ತಿದ್ದ ನನ್ನ ಹೆತ್ತವರು ದಿನಂಪ್ರತಿ ಕಾಲೇಜಿನಿಂದ ಸರಿಯಾದ ಸಮಯದಲ್ಲಿ ಆಗಮಿಸುತ್ತಿದ್ದ ಮಗಳು ಬರದೆ ಇದ್ದಾಗ ಆತಂಕಗೊಂಡಿದ್ದರು. ಸ್ಥಳಿಯರ ಜೊತೆಗೂಡಿ ರಾತ್ರಿಯಿಡೀ ಆ ಮಳೆಯಲ್ಲಿ ಹುಡುಕಿದರೂ ನಾನು ಮಾತ್ರ ಸಿಗಲೇ ಇಲ್ಲಾ. ಮರುದಿನ ಬೆಳಿಗ್ಗೆಯೂ ಹುಡುಕಾಟ ಮುಂದುವರಿಸಿದಾಗ ಮಧ್ಯಾಹ್ನದ ವೇಳೆಗೆ ನೇತ್ರಾವತಿ ಸ್ನಾನ ಘಟ್ಟದಿಂದ ಸ್ವಲ್ಪ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ  ನನ್ನ ಮೃತದೇಹ ಸಿಕ್ಕಿತ್ತು. ನನ್ನ ಹೆತ್ತ ಜೀವಗಳಿಗೆ ತಮ್ಮ ಮಗಳನ್ನು ಆ ಪರಿಸ್ಥಿತಿಯಲ್ಲಿ ಕಂಡು ಆಕಾಶವೇ ತಲೆ ಮೇಲೆ ಬಿದ್ದಾಂತಾಗಿತ್ತು. ಆದರೆ ನನ್ನ ನರಳಾಟ ತಂದೆ ತಾಯಿಗಳ ನೋವು ಮನಸ್ಸಿಗೆ ಅರ್ಥವಾಗೋ ಹೊತ್ತಿಗಾಗಲೇ ನನ್ನನ್ನು ಅತ್ಯಾಚಾರವೆಸಗಿ ಕೊಂದು ತಮ್ಮ ರಕ್ತದ ಕೈಗಳನ್ನು ಪ್ರಸನ್ನೆಯಾಗಿ ಹರಿಯುತ್...