Posts

Showing posts from September, 2019

ಭಾರತದ_ಚರಿತ್ರೆ -1 ಬ್ರಿಟಿಷರ ನಿದ್ದೆಗೆಡಿಸಿದ ಪೈಕಾ ಕ್ರಾಂತಿಯೆಂಬ ಪುರಿಯ ಉರಿ..🙏

Image
#ಭಾರತ_ದರ್ಶನ ಬ್ರಿಟಿಷರ ನಿದ್ದೆಗೆಡಿಸಿದ ಪೈಕಾ ಕ್ರಾಂತಿಯೆಂಬ ಪುರಿಯ ಉರಿ..🙏   ಇಂದಿಗೆ ಸರಿಯಾಗಿ ಇನ್ನೂರು ವರ್ಷಗಳ ಹಿಂದೆ ಪುರಿಯ ರಥಬೀದಿ ಅಕ್ಷರಶಃ ಸ್ಮಶಾನವಾಗಿತ್ತು. ಜಗನ್ನಾಥ ಮಂದಿರದ ಐವತ್ತಕ್ಕೂ ಹೆಚ್ಚು ಅರ್ಚಕರ ಶವಗಳು ದೇಗುಲದ ಎದುರಿನ ಬೀದಿಯಲ್ಲಿ ಬೇಸಗೆಯ ಬಿರು ಬಿಸಿಲಿಗೆ ಒಣಗುತ್ತಿದ್ದವು. ಪೈಕ ಸರದಾರರ ಶವಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿತ್ತು. ಪೈಕ ಯೋಧರ ಮಕ್ಕಳ ಶವಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೈಕಾಗಳನ್ನು ಒಡಿಶಾದಿಂದ ಬಹಿಷ್ಕರಿಸಲಾಗಿತ್ತು. ಹಲವಾರು ಜನರನ್ನು ಬ್ರಿಟನ್ನಿನ ತೋಟಗಳಿಗೆ ಗುಲಾಮರಂತೆ ದುಡಿಸಲು ರವಾನಿಸಲಾಗಿತ್ತು. ಇಡಿಯ ಒಡಿಶಾದ ಮನೆಮನೆಗಳಲ್ಲಿ ದುಃಖ ಮಡುಗಟ್ಟಿತ್ತು. ಒಂದೊಂದು ಮನೆಯಲ್ಲೂ ಒಂದೋ ಮನೆಯ ಸದಸ್ಯರೊಬ್ಬರು ಕೊಲೆಯಾಗಿದ್ದರು ಅಥವಾ ದೇಶಭೃಷ್ಟರಾಗಿದ್ದರು. ಪುರಿಯ ಜಗನ್ನಾಥ ಅಸಹಾಯಕನಾಗಿ ದೇಗುಲದೊಳಗೆ ಬಂಧಿಯಾಗಿದ್ದ! ಬ್ರಿಟಿಷರು ಭಾರತದಲ್ಲಿ ಯಾವುದೇ ಕ್ರೌರ್ಯ ತೋರಲಿಲ್ಲ ಎನ್ನುವವರಿಗೆ ಇತಿಹಾಸದ ಈ ತಿಂಗಳು, ಒಡಿಶಾದ ಬೀದಿಬೀದಿಗಳು ಕ್ರೌರ್ಯದ ಪರಾಕಾಷ್ಠೆಯ ಸಾಕ್ಷಿಯಾಗಿ ನಿಂತಿದ್ದವು. ಭಾರತದ ಇತಿಹಾಸದ ಘಟನೆಗಳು ಉದ್ದೇಶಪೂರ್ವಕವಾಗಿಯೇ ಮುಚ್ಚಲ್ಪಟ್ಟಿವೆ. ಬ್ರಿಟಿಷರು ತಮ್ಮ ಸ್ವಂತ ಲಾಭಕ್ಕೆಂದೇ ಆರಂಭಿಸಿದ ರೈಲ್ವೇ, ಅಂಚೆ-ತಂತಿ, ಉದ್ಯಮ, ಕೆಲ ಸುಧಾರಣೆಗಳನ್ನೇ ಘನವಾಗಿ ಪ್ರತಿಪಾದಿಸುವ ಆಷಾಢಭೂತಿ ಇತಿಹಾಸಕಾರರಿಗೆ ಭಾರತೀಯರ ಸ್ವಾತಂತ್ರ್ಯದ ಉತ್ಕಟೇಚ್ಛೆ, ...

ವಿದ್ಯೆ ಬುದ್ದಿ ಕಲಿಸಿದ ಗುರುವಿಗೆ ಶಿಕ್ಷಕರ ದಿನದ ಶುಭಾಷಯಗಳು.😍💐🙏

Image
#ವಿದ್ಯೆ_ಬುದ್ದಿ_ಕಲಿಸಿದ_ಗುರುವಿಗೆ_ಶಿಕ್ಷಕರ_ದಿನದ_ಶುಭಾಷಯಗಳು...💐💐🙏🏼🙏🏼 ಭಾರತದಲ್ಲಿ ಗುರು ಶಿಷ್ಯರ ಪರಂಪರೆಯ ದೊಡ್ಡ ಪಟ್ಟಿಯೇ ಇದೆ. ಯಮಧರ್ಮ-ನಚೀಕೇತ, ದ್ರೋಣಾಚಾರ್ಯ- ಆರ್ಜುನ, ಕೃಷ್ಣ-ಅರ್ಜುನ, ಚಾಣಕ್ಯ- ಚಂದ್ರಗುಪ್ತ, ರಾಮಕೃಷ್ಣ ಪರಮಹಂಸ-ಸ್ವಾಮಿ ವಿವೇಕಾನಂದ, ಗೋಪಾಲಕೃಷ್ಣಗೋಖಲೆ-ಮಹಾತ್ಮ ಗಾಂಧಿ, ಟಿ.ಎಸ್. ವೆಂಕಣ್ಣಯ್ಯ-ಕುವೆಂಪು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 'ತಾಯಿಯೇ ಮೊದಲ ಗುರು' ಎನ್ನುತ್ತಾರೆ. ಇದು ನಿಜ ಕೂಡ. ಮಗುವಿಗೆ ಮೊದಲು ಕೇಳಿಸುವುದು ತನ್ನಮ್ಮನ ಮಾತುಗಳೇ. ತಾಯಿಯಾದವಳು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ. ತಾಯಿಯ ಮಮತೆಯನ್ನು, ತಂದೆಯಂತೆ ಜವಾಬ್ದಾರಿಯಿಂದ ಪೋಷಣೆ ಮಾಡಬಲ್ಲವನೇ ನಿಜವಾದ ಗುರು. ಗುರುವಾದವನು ತನ್ನ ಶಿಷ್ಯನಿಗೆ ತಂದೆ-ತಾಯಿ ಎರಡೂ ಆಗಬಲ್ಲ. ಒಳ್ಳೆಯ ಮಾರ್ಗದಲ್ಲಿ ನಡೆಯುವವರು, ನಡೆದವರು,ನಡೆಯಬಯಸುವವರು ಇನ್ನಾದರೂ ತಮ್ಮ ಮಾರ್ಗದರ್ಶಕರನ್ನು ಮರೆಯದೇ ನೆನಪಿಸಿಕೊಳ್ಳುವುದು ಅಗತ್ಯ.  ಶಿಷ್ಯರ ಏಳಿಗೆಯನ್ನು ಸದಾ ಬಯಸುವ ಗುರುಗಳನ್ನು ಒಮ್ಮೆಯೂ ನೆನಪಿಸಿಕೊಳ್ಳದವನು ಮನುಷ್ಯನೇ ಅಲ್ಲಾ ಬಿಡಿ.ಭಾರತದಲ್ಲಿ ಗುರುವನ್ನು ನೆನಪಿಕೊಳ್ಳುವಂತೆ ಮಾಡಿದ ಕೀರ್ತಿ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರಿಗೆ ಸಲ್ಲುತ್ತದೆ. ಉದಾರ ಮನೋಭಾವನೆಯಿಂದ ತಾವು ಹುಟ್ಟಿದ ದಿನವನ್ನು (ಸೆಪ್ಟೆಂಬರ್ 5) ಶಿಕ್ಷಕರ ದಿನವೆಂದು ಆಚರಿಸಲು ತ...

ವೀರಯೋಧ ವಿಕ್ರಂ ಭಾತ್ರಾ ರ ನೆನಪು 😍🙏

Image
#ಏ_ಮೇರೆ_ವತನ್_ಕೇ_ಲೋಗೋ… #ವಿಕ್ರಂ_ಭಾತ್ರಾ 😍🙏🏼🇮🇳 ಮೊಬೈಲ್ ಪ್ಲೇ ಬ್ಯಾಕ್ನಲ್ಲಿ ಲತಾ ಮಂಗೇಶ್ಕರ್ ಹಾಡಿದ “ಏ ಮೇರೆ ವತನ್ ಕೇ ಲೋಗೊ” ಹಾಡು ಗುಯ್ ಗುಟ್ಟುತ್ತಿತ್ತು, ಅದನ್ನ ಹಾಡು ಎಂದರೆ ತಪ್ಪಾಗುತ್ತೆ, ಅದೊಂದು ಚರಮ ಗೀತೆ, ಕಾರ್ಗಿಲ್ ಕಣ್ಣೆದುರು ಬಂದು ಹೋಯ್ತು, ಗೆದ್ದು ಬೀಗಿದ್ದಕ್ಕಿಂತ, ಕಳೆದುಕೊಂಡು ಅತ್ತದ್ದೇ ಜಾಸ್ತಿ. ನಾವು ಗೆದ್ದು ಸೋತಿದ್ದೆವು, ಪಾಕಿಸ್ತಾನ ಸೋತು ಸತ್ತಿತ್ತು. ಹೀಗೆ ಹಾಡು ಕೇಳುತ್ತಿದ್ದವನಿಗೆ ನೆನಪಾದದ್ದು ಕಾರ್ಗಿಲ್ ಹೀರೋಗಳದ್ದು, ಅದರಲ್ಲೂ #ವಿಕ್ರಂ_ಭಾತ್ರಾ 🙏🏼 ಆತ ಮನಸ್ಸು ಮಾಡಿದ್ದರೆ ಹಡಗು ಹತ್ತಿ ಡಾಲರ್ ಗಟ್ಟಲೆ ದುಡಿಯಬಹುದಿತ್ತು, ವಿದೇಶಿ ಹಡಗಿನಲ್ಲಿ ಕೆಲಸವೂ ಸಿಕ್ಕಿತ್ತು, ಆದರೆ ಆತ ಹಡಗಿನ ಯುನಿಪಾರಂ ತ್ಯಜಿಸಿ ಸೇನೆಯ ಯುನಿಪಾರಂ ತೊಟ್ಟುಬಿಟ್ಟ.. ತಂದೆ ಜಿ.ಎಲ್ ಭಾತ್ರಾ ಚಂಡೀಗಡದ ಪಾಲಾಲಂಪುರದ ಸಣ್ಣ ಶಾಲೆಯೊಂದರ ಮುಖ್ಯ ಶಿಕ್ಷಕ, ತಾಯಿ ಜಯ್ ಕಮಲ್ ಶಿಕ್ಷಕಿ ಜೊತೆಗೊಬ್ಬ ಸಹೋದರ ಇವಿಷ್ಟು ಭಾತ್ರಾನ ಪ್ರಪಂಚ,ತೀರಾ ಮಧ್ಯಮ ವರ್ಗದ ಕುಟುಂಬವದು, ವಿಕ್ರಂ ಸೇನೆಗೆ ಸೇರಿ ಹದಿನೆಂಟು ತಿಂಗಳಾಗಿತ್ತಷ್ಟೆ, ಮೊದಲ ರಜೆ ಸಿಕ್ಕಿತ್ತು, ಅಮ್ಮನ ಕೈ ತುತ್ತು ತಿನ್ನಬೇಕು,ಅಪ್ಪ,ತಮ್ಮನ ಜೊತೆ ಹರಟಬೇಕು ಎಂದು ಆಸೆಯಿಂದ ಮನೆಗೆ ಬಂದಿದ್ದ, ಹೋಳಿ ಹಬ್ಬದ ಸಂದರ್ಭ ಪಾಲಾಲಂಪುರದಲ್ಲಿ ನೇವುಗಲ್ ಕಫೇ ಎಂಬ ಹೋಟೆಲ್ ಇದೆ,ಅದ್ಯಾವುದೋ ಕೆಲಸಕ್ಕೆ ಹೋದಾತನಿಗೆ ಪರಿಚಯಸ್ಥನೊಬ್ಬ ಸಿಕ್ಕಿದ್ದ, “ಯುದ್ಧ ಪ್ರಾರ್...