Posts

Showing posts from January, 2020

ಪಂಜಾಬ್ ನ ಕೇಸರಿ,ಅಪ್ರತಿಮ ದೇಶಪ್ರೇಮಿ, ಸ್ವಾತಂತ್ರ್ಯಹೋರಾಟಗಾರ,ಕ್ರಾಂತಿಕಾರಿ #ಲಾಲ್_ಲಜಪತ್_ರಾಯ್ ರವರ 155 ನೇ ಜನ್ಮದಿನದ ಶುಭಾಶಯಗಳು..😍🙏💐

Image
ಪಂಜಾಬ್ ನ ಕೇಸರಿ,ಅಪ್ರತಿಮ ದೇಶಪ್ರೇಮಿ, ಸ್ವಾತಂತ್ರ್ಯಹೋರಾಟಗಾರ,ಕ್ರಾಂತಿಕಾರಿ #ಲಾಲ್_ಲಜಪತ್_ರಾಯ್ ರವರ 155 ನೇ ಜನ್ಮದಿನದ ಶುಭಾಶಯಗಳು..😍🙏💐 ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಕ್ರಾಂತಿಕಾರಿ ಹೋರಾಟದ ಹಾದಿ ತುಳಿದ ಪ್ರಮುಖರಲ್ಲಿ ಲಾಲಾ ಲಜಪತ್ ರಾಯ್ ಒಬ್ಬರು. ಪಂಜಾಬ್ ಕೇಸರಿ ಎಂದೇ ಖ್ಯಾತರಾಗಿದ್ದ ಇವರು ಬ್ರಿಟಿಷರ ವಿರುದ್ಧ ಹೋರಾಡಲು ಮತ್ತು ಯುವಕರಲ್ಲಿ ರಾಷ್ಟ್ರಪ್ರೇಮ ಮೂಡಿಸಲು ತಮ್ಮ ಪ್ರಖರ ಮಾತಿನ ಮೂಲಕವೇ ಕ್ರಾಂತಿಯ ಕಿಚ್ಚು ಹಚ್ಚಿದರು. ಈ ಭೂಮಿ ಮೇಲೆ ಚೆಲ್ಲಿರುವುದು ನಮ್ಮ ಪೂರ್ವಜರ ರಕ್ತ. ನಾವು ಈ ಭೂಮಿಯನ್ನು ಬಳಸುತ್ತಿದ್ದೇವೆ. ಅದರ ಮೇಲೆ ವಾಸಿಸುತ್ತಿದ್ದೇವೆ. ಆದ್ದರಿಂದ ಈ ಭೂಮಿ ನಮ್ಮದು ಇಲ್ಲವೇ ದೇವರದ್ದು…’ ಹೀಗೆ ತಮ್ಮ ಪ್ರಖರ ಮಾತುಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಯ ಕಿಚ್ಚು ಹಚ್ಚಿದವರು ಅಪ್ರತಿಮ ವೀರ ಲಾಲಾ ಲಜಪತ್​ರಾಯ್. ಲಾಲ್-ಬಾಲ್-ಪಾಲ್ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಅವಲೋಕಿಸಿದಾಗ ಒಟ್ಟಿಗೆ ಕಾಣಿಸಿಕೊಳ್ಳುವ ಹೆಸರುಗಳು. ಲಾಲ್ ಎಂದರೆ ಲಾಲಾ ಲಜಪತರಾಯ್, ಬಾಲ್ ಎಂದರೆ ಬಾಲ ಗಂಗಾಧರ ತಿಲಕ್, ಪಾಲ್ ಎಂದರೆ ಬಿಪಿನ್ ಚಂದ್ರಪಾಲ್. ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದ ಹೋರಾಟದ ದಿಕ್ಕನ್ನು ಬದಲಿಸಿದ ಈ ಯುವಕರು ಕ್ರಾಂತಿಕಾರಿ ಹೋರಾಟದಿಂದಷ್ಟೇ ಸ್ವರಾಜ್ಯದ ಕನಸು ನನಸ...