Posts

Showing posts from February, 2021

ಪೊಗರು

ಪೊಗರು ಚಿತ್ರದ ವಿವಾದದ ಸುತ್ತಾ, ಭೌದ್ಧಿಕ ಗುಲಾಮಗಿರಿ ಕಳಚುವ ಸುಸಂದರ್ಭ..!! ಚಿತ್ರದಲ್ಲಿ ವಿವಾದವಾಗಿರುವ ಒಂದೊಂದೇ ವಿಷಯಗಳನ್ನು ನೋಡೋಣಾ:- ಯಜ್ಞಮಾಡುತ್ತಿರುವ ಪುರೋಹಿತನ ಹೆಗಲ ಮೇಲೆ ಕಾಲಿಟ್ಟ ಎಂಬುದು..!! ಕಾರಣ:- ಯಜ್ಞ-ಯಾಗ ಎಂಬುದು ಲೋಕಕಲ್ಯಾಣಾರ್ಥ, ಅದನ್ನು ಮಾಡುವವರು ಲೋಕಹಿತ ಬಯಸುವವರು ಎಂಬುದು. ರಿಯಾಲಿಟಿ:- ಲೋಕಕಲ್ಯಾಣಾರ್ಥ ಮಾಡುವ ಬಹುಮುಖ್ಯ ಯಾಗಗಳು ಎರಡೇ, "ರಾಜಸೂಯ", " ಅಶ್ವಮೇಧ". ಉಳಿದವು ತಮ್ಮತಮ್ಮ ಅಭಿಷ್ಟೇಗೆ ಮಾಡಿಸುವಂಥಹುವು. ಇನ್ನು ಯಜ್ಞ-ಯಾಗಗಳು ವ್ಯಾವಹಾರಿಕವಾಗಿ ಬಹಳ ಕಾಲವಾಗಿದೆಯಲ್ಲಾ? ಉದಾಹರಣೆಗೆ ಪ್ರಳಯಕಾಲ ಎಂಬ ಭ್ರಮೆ 2012 ರಲ್ಲಿ ಉಂಟಾಗಿದ್ದ ಸಂದರ್ಭದಲ್ಲಿ ಬಹಳಷ್ಟು ಜನರು "ಪ್ರಳಯಕಾಲದ ರುದ್ರಯಾಗ" ಮಾಡಿ ಜಗತ್ತನ್ನು ಕಾಪಾಡುತ್ತೇವೆ ಎಂಬ "ಬೃಹತ್ ಬ್ರಹ್ಮಾಂಡ" ನಾಟಕಗಳನ್ನು ಟಿವಿಯಲ್ಲಿ ಬಹಳಕಾಲ ನೋಡಿದೆವಲ್ಲಾ..!! ಕಾಲಿಟ್ಟದ್ದು ತಪ್ಪಾಗಿದೆ ಎಂದು, ಅಸಲಿ ಕಾರಣ ಆ ಕಲಾವಿದರೂ ಸಹ ನಿಜ ಬ್ರಾಹ್ಮಣರೇ ಅಗಿದ್ದಾರೆ. ಪ್ರಣಯಮೂರ್ತಿ, ಶಂಕರ್ ಅಶ್ವತ್ಥ್ ಅವರು. ಅದೂ ಸಮಸ್ಯೆ, ಇಂದು ಬ್ರಾಹ್ಮಣ ಪಾತ್ರಧಾರಿಗಳ ಮೇಲೆ ಕಾಲಿಟ್ಟವರು ಮುಂದೆ ಬ್ರಾಹ್ಮಣರಿಗೆ ಗೌರವ ಕೊಡುವರೇ ಎಂಬುದು, ಏಕೆಂದರೆ ಶತಶತಮಾನಗಳಿಂದ "ಬ್ರಾಹ್ಮಣರಿಗೆ ಅಗೌರವ ತೋರಿಸುವುದು ಗೋಹತ್ಯೆಗೆ ಸಮ, ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಬ್ರಾಹ್ಮಣರಿಗೆ ಕಾಲುತಾಗಿಸುವುದು ಬ್ರಹ್ಮ ಹತ್ಯೆಗೆ ಸಮ...