Posts

Showing posts from December, 2019

ಧೈರ್ಯಕ್ಕೆ ಮತ್ತೊಂದು ಹೆಸರೇ ಜನರಲ್ ತಿಮ್ಮಯ್ಯ 🇮🇳🙏

Image
#ಧೈರ್ಯಕ್ಕೆ_ಮತ್ತೊಂದು_ಹೆಸರೇ_ಜನರಲ್_ತಿಮ್ಮಯ್ಯ ಜನರಲ್ ತಿಮ್ಮಯ್ಯರವರ ಸಾಧನೆ ಮತ್ತು ಅಂದಿನ ಸರ್ಕಾರ ಜನರಲ್ ತಿಮ್ಮಯ್ಯ ಅವರ ಜೊತೆ ನಡೆದುಕೊಂಡ ರೀತಿಯನ್ನು #ಬ್ರಿಗೇಡಿಯರ್_ಜಾನ್_ಪಿ_ದಳವಿ ಈ ರೀತಿ ವಿವರಿಸುತ್ತಾರೆ..🙏 ಅವತ್ತಿನ ತನಕ ನಿರ್ಲಕ್ಷ್ಯದಿಂದಿದ್ದು, ಉಡಾಫೆಯ ಮಾತುಗಳನ್ನಾಡುತ್ತಲೇ ಓಡಾಡಿಕೊಂಡಿದ್ದ ನೆಹರು ಇದ್ದಕ್ಕಿದ್ದಂತೆ ಭಾರತದ ಗಡಿಗಳನ್ನು ಕಾಯುವ ಕೆಲಸ ವನ್ನು ಸೇನೆಗೆ ಒಪ್ಪಿಸಿ ಬಿಟ್ಟಿದ್ದರು. ಪಾರ್ಲಿಮೆಂಟಿನಲ್ಲಿ ಅವರಿಗೆ ವಿರೋಧ ಪಕ್ಷಗಳೆದುರು ಮುಖ ಉಳಿಸಿಕೊಳ್ಳುವ ಹರಕತ್ತು ಇತ್ತು. ಬೇರಿನ್ಯಾವುದೂ ತೋಚದಿದ್ದಾಗ, ಇಡೀ ಸಮಸ್ಯೆಯನ್ನು ಸೇನೆಗೆ ಒಪ್ಪಿಸಿದ್ದೇನೆ ಎಂದು ನುಣಿಚಿಕೊಂಡು ಬಿಟ್ಟರು. ಒಬ್ಬ ಅಂತಾರಾಷ್ಟ್ರೀಯ ಮುತ್ಸದ್ದಿ ಯಾಗಿ ಬೆಳೆಯಬಯಸುತ್ತಿದ್ದ ಮಹಾನ್ ಬುದ್ಧಿವಂತ ನೆಹರೂಜಿಗೆ ಇಂಥದೊಂದು ತಪ್ಪು ಮಾಡಬಾರದೆಂದು ತೋಚಲೇ ಇಲ್ಲ. ಚೀನದ ನಾಯಕರು NEFA ದ ಸರಹದ್ದುಗಳ ತನಕ ತಮ್ಮ ಮಜಬೂತಾದ ಸೈನ್ಯವನ್ನು ತಂದು ನಿಲ್ಲಿಸಿದಾಗಲೂ ಕೂಡ ನಾವು ಸೇನೆಯನ್ನು ಬಳಸುತ್ತಿದ್ದೇವೆ ಎಂಬ ಹೇಳಿಕೆ ಕೊಟ್ಟಿರಲಿಲ್ಲ. 'ಅಲ್ಲಿ ನಮ್ಮ ಗಡಿ ರಕ್ಷಕ ಪಡೆ (Frontier guards) ಮಾತ್ರ ಇದೆ" ಎಂದು ಜಗತ್ತಿಗೆ ಸುಳ್ಳು ಹೇಳುತ್ತ ಬಂತು. ಆದರೆ ನಮ್ಮ ನೆಹರೂ ಇದ್ದಕ್ಕಿದ್ದಂತೆ "ಸೈನ್ಯಕ್ಕೆ ಗಡಿ ಕಾಯುವ ಜವಾಬ್ದಾರಿ. ಒಪ್ಪಿಸಿದ್ದೇನೆ' ಎಂದು ಹೇಳಿಕೆ ಕೊಡುವ ಮೂಲಕ ಊರಿಗೆ ಮುಂಚೆ ನಾವು ಯುದ್ಧಕ್ಕೆ ಸಿದ...

ಓಂ ಪ್ರಕಾಶ್ ಯಾದವ್ ವಿಶ್ವಕ್ಕೆ ಸ್ಪೂರ್ತಿದಾಯಗುವ ಬಾಲಕ..😍🙏

Image
#ಓಂ_ಪ್ರಕಾಶ್_ಯಾದವ್ 🧡 ಏಳನೇ ತರಗತಿಯಲ್ಲಿ ಓದುತ್ತಿದ್ದ ಉತ್ತರಪ್ರದೇಶದ ರೈತನ ಮಗ. ವ್ಯಾನ್ ವೊಂದಕ್ಕೆ ಬೆಂಕಿ ಬಿದ್ದಾಗ ಮಕ್ಕಳನ್ನು ರಕ್ಷಿಸಿ ಸಂಜಯ ಚೋಪ್ರ ಅವಾರ್ಡ ಗೆದ್ದರು. ಮತ್ತು 2011ರಲ್ಲಿ ರಾಷ್ಟ್ರದ ಧೈರ್ಯಶಾಲಿ ಪ್ರಶಸ್ತಿ ಗೆದ್ದ ಹುಡುಗ..😍🙏 ಅಂದು ಸೆಪ್ಟಂಬರ್ 11, 2010. ತನ್ನ ಸ್ನೇಹಿತರ ಜೊತೆ ಮಾರುತಿ ಕಾರ್ ನಲ್ಲಿ ಶಾಲೆಗೆ ಹೋಗುತ್ತಿದ್ದ. ಆದರೆ ಆಕಸ್ಮಿಕವಾಗಿ ಮಾರುತಿ ಕಾರಿಗೆ ಬೆಂಕಿ ಹೊತ್ತಿತು. ಕಾರಣವಿಷ್ಟೆ ಗ್ಯಾಸ್'ಕಿಟ್ ನಲ್ಲಿನ ಶಾರ್ಟಸರ್ಕ್ಯೂಟ್ !!! ತಕ್ಷಣ ಮಾರುತಿ ಕಾರಿನ ಡೋರ್ ತೆಗೆದು ಚಾಲಕ ಪಲಾಯನ ಗೈದ. ಆದರೆ ಯಾದವ್ ಹಾಗೆ ಮಾಡಲಿಲ್ಲ. ಬದಲಾಗಿ ತನ್ನ ಬಳಿಯಿದ್ದ ಡೋರ್ ಮುರಿದ,ಬಾಗಿಲು ತೆರೆದ, ತನ್ನ ಸ್ನೇಹಿತರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಎಳೆದು ಹಾಕಿ, ಯಾದವ್ ಆ ಹೊತ್ತಿನಲ್ಲಿ ತನ್ನ ಎಂಟು ಜನ ಸಹಪಾಠಿಗಳನ್ನು ರಕ್ಷಿಸಿದ್ದ. ಆಗಲೆ ಬೆಂಕಿ ಅವನ ಮುಖ ಬೆನ್ನು ತೋಳುಗಳನ್ನು ಬೇಯಿಸಿಬಿಟ್ಟಿತು. ಅಷ್ಟಾಗಿಯೂ ಅವನ ಮುಖದಲ್ಲಿ ಭಯ ಕಾಣುತ್ತಿರಲಿಲ್ಲ.ಬದಲಾಗಿ ಅವನ ಮುಖದ ಸುಟ್ಟಗಾಯಗಳು ನೋಡಿದವರನ್ನು ಭಯಬೀಳಿಸುತ್ತಿತ್ತು. ಅವನ ಆತ್ಮಸ್ಥೈರ್ಯ ಒಂದಿಂಚು ಕುಸಿದಿರಲಿಲ್ಲ. ಸರಿಯಾದ ಚಿಕಿತ್ಸೆ ಇಲ್ಲದೆ ಒಂದು ವರ್ಷ ಶಾಲೆಯಿಂದ ದೂರ ಕೂಡ ಉಳಿಯಬೇಕಾದ ಪರಿಸ್ಥಿತಿ ಎದುರಾಯಿತು..😔 ಸಂದರ್ಶಕನೊಬ್ಬ ಘಟನೆಯ ಬಗ್ಗೆ ಕೇಳಿದ್ದಕ್ಕೆ ಹೀಗೆ ಹೇಳಿದ "ನನಗೆ ನನ್ನ ಮೈ ಸುಟ್ಟುಹೋದ ಅನುಭವ ಆಗುತ...